ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಸ್‌ಬಿಎಂ ಎಟಿಎಂ ಗ್ರಾಹಕರೇ, ಹಣ ವಿಥ್‌ ಡ್ರಾ ಮಾಡಲು ಮೊಬೈಲ್‌ ಮರೆಯದೇ ಕೊಂಡೊಯ್ಯಿರಿ: ಏಕೆ ಗೊತ್ತಾ?

ಇಮೇಜ್
  ಎಸ್‌ಬಿಐ ಎಟಿಎಂನಿಂದ ಹಣ ಪಡೆಯುವಾಗ ಹೆಚ್ಚಿನ ಭದ್ರತೆ, ಸುರಕ್ಷತೆಯನ್ನು ಖಾತರಿ ಪಡಿಸಲು ಇದು ಅಗತ್ಯವಿದೆ. ಈ ಸೌಲಭ್ಯವನ್ನು ಜಾರಿಗೆ ತರುವುದರಿಂದ ಎಸ್‌ಬಿಐ ಗ್ರಾಹಕರು ವಂಚನೆಗೆ ಒಳಗಾಗುವುದು ತಪ್ಪುತ್ತದೆ. ಮುಂಬಯಿ:  ದೇಶದ ಪ್ರತಿಷ್ಠಿತ ಮತ್ತು ಅತ್ಯಂತ ಬೃಹತ್ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಗ್ರಾಹಕರೇ ಇನ್ನು ಮುಂದೆ ಕೆಲವು ಹೊಸ ನಿಯಮಗಳಿಗೆ ಒಗ್ಗಿಕೊಳ್ಳಬೇಕಾಗಿದೆ. ಏಕೆಂದರೆ ಇದೇ ಸೆಪ್ಟೆಂಬರ್‌ 18ರಿಂದ  ಎಸ್‌ಬಿಐ  ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಎಸ್‌ಬಿಐ ಗ್ರಾಹಕರು  ಎಟಿಎಂನಿಂದ ಹಣ ಪಡೆಯಬೇಕಾದರೆ ಕಡ್ಡಾಯವಾಗಿ ಮೊಬೈಲ್‌ ಹೊಂದಿರಲೇಬೇಕು. ಏಕೆಂದರೆ ಓಟಿಪಿ ಆಧಾರಿತ ಸೇವೆ ಜಾರಿಗೆ ಬರುತ್ತಿದೆ. ಅಂದರೆ 10 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ಪಡೆಯಬೇಕಾದರೆ ಓಟಿಪಿಯನ್ನು ಎಂಟರ್‌ ಮಾಡಬೇಕು. ಒಂದು ವೇಳೆ ನೀವು 10 ಸಾವಿರ ಪಡೆಯಬೇಕು ಎಂದಾರೆ ಡೆಬಿಟ್‌ ಕಾರ್ಡ್‌ ಪಿನ್‌ ಜತೆಗೆ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನೂ ನಮೂದಿಸಬೇಕು. ಆಗ ಈ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ನಂತರ ಅದನ್ನು ಕೂಡ ನಮೂದಿಸಬೇಕು. ಆ ನಂತರ ನಿಮಗೆ ಹಣ ಲಭ್ಯವಾಗಲಿದೆ. ಸೈಬರ್‌ ಅಪರಾಧ ಹಾಗೂ ಬ್ಯಾಂಕಿಂಗ್‌ ವಂಚನೆಯನ್ನು ತಪ್ಪಿಸಲು ಈ ರೀತಿಯ ಕ್ರಮ ಅಗತ್ಯ ಎಂದು ಈಗಾಗಲೇ ಬ್ಯಾಂಕ್‌ ಸ್ಪಷ್ಟನೆ ನೀಡಿದೆ. ಎಸ್‌ಬಿಐ ಎಟಿಎಂನಿಂದ ಹಣ ಪಡೆಯುವಾಗ ಹೆಚ್ಚಿ...

ಕೋವಿಡ್‌ ಅವಧಿಯ ಸಾಲದ ಬಡ್ಡಿ ಮನ್ನಾಗೆ ಕೇಂದ್ರದಿಂದ ಪರಿಶೀಲನೆ

ಇಮೇಜ್
  ಇಎಂಐ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾಗೊಳಿಸುವ ಬಗ್ಗೆ ತಜ್ಞರ ಸಮಿತಿ ಪರಾಮರ್ಶೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯದರ್ಜೆ ಸಚಿವ ಅನುರಾಗ್‌ ಠಾಕೂರ್‌‌ ವಿವರಣೆ ನೀಡಿದ್ದಾರೆ. ಹೊಸದಿಲ್ಲಿ: ಕೋವಿಡ್‌-19 ಬಿಕ್ಕಟ್ಟಿನ ಲಾಕ್‌ಡೌನ್‌ ಅವಧಿಯಲ್ಲಿ ಮುಂದೂಡಲಾಗಿದ್ದ ಸಾಲಗಳ ಇಎಂಐಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಕ್ಕೆ ಸಂಬಂಧಿಸಿ ಸರಕಾರ ನೇಮಿಸಿರುವ ತಜ್ಞರ ಸಮಿತಿ ಪರಿಶೀಲಿಸಲಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ಲೋಕಸಭೆಗೆ ತಿಳಿಸಿದ್ದಾರೆ. ನಾನಾ ಪ್ರತಿಪಕ್ಷಗಳು ಲಾಕ್‌ಡೌನ್‌ ಅವಧಿಯಲ್ಲಿ ಜನರ ಸಾಲಗಳ ಬಡ್ಡಿ ಮನ್ನಾ ಮಾಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಸಚಿವ ಅನುರಾಗ್‌ ಠಾಕೂರ್‌ ಉತ್ತರಿಸಿದ್ದಾರೆ. ''ಲಾಕ್‌ ಡೌನ್‌ ಅವಧಿಯಲ್ಲಿ ಸಾಲದ ಇಎಂಐ ಮುಂದೂಡಿಕೆಗೆ ಬ್ಯಾಂಕ್‌ಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಸರಕಾರವು ಇಎಂಐ ಮುಂದೂಡಿಕೆಯ ಅವಧಿಯಲ್ಲಿ ಸಾಲದ ಬಡ್ಡಿ ಮನ್ನಾ ಮಾಡಿದರೆ ಉಂಟಾಗಲಿರುವ ಆರ್ಥಿಕ ಪರಿಣಾಮಗಳ ಬಗ್ಗೆ ಪರಿಶೀಲಿಸಲಿದೆ" ಎಂದು ಅನುರಾಗ್‌ ಠಾಕೂರ್‌ ಸೋಮವಾರ ತಿಳಿಸಿದರು. ಕಾಂಗ್ರೆಸ್‌, ಟಿಎಂಸಿ, ಆರ್‌ಎಸ್‌ಪಿ, ಬಿಜೆಪಿ, ಎಐಎಂಐಎಂ ಪಕ್ಷದ ಸದಸ್ಯರು ಈ ಸಂಬಂದ ಪ್ರಶ್ನೆಗಳನ್ನು ಕೇಳಿದ್ದರು. ಸಾಲದ ಇಎಂಐ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ಮಾಡುವ, ಇಎಂಐ ಮುಂದೂಡಿಕೆಯನ್ನು ಮತ್ತಷ್ಟು ವಿಸ್ತರಿಸುವ ಪ್ರಸ್ತಾಪ ಸರಕಾರದ ಮುಂದಿದೆಯೇ? ಸಾಲದ ಪುನಾರಚನೆಗೆ ಬೇಡಿಕೆಗಳಿವೆಯ...

ರಿಲಾಯನ್ಸ್‌ ಜಿಯೋ ಫೋನ್‌ 3 : (ಅಂದಾಜು ಬಿಡುಗಡೆ ದಿನಾಂಕ) Approximate release date July 27, 2020

ಇಮೇಜ್
ರಿಲಾಯನ್ಸ್‌ ಜಿಯೋ ಫೋನ್‌ 3 ಭಾರತದಲ್ಲಿ ಬಿಡುಗಡೆಯಾದ ಪ್ರಸಿದ್ಧ ಮೊಬೈಲ್‌. ರಿಲಾಯನ್ಸ್‌ ಜಿಯೋ ಫೋನ್‌ 3 ಡಿಸ್‌ಪ್ಲೇ ಸೈಜ್‌ 5 inches (12.7 cm) ಹೊಂದಿದ್ದು, HD (720 x 1280 pixels) ರೆಸೊಲ್ಯೂಷನ್ ‌ ಹಾಗೂ 5 inches (12.7 cm) ಡಿಸ್‌ಪ್ಲೇ ಟೈಪ್‌ ಹೊಂದಿದೆ.  2.0 RAM ಹಾಗೂ 64 GB ಇಂಟರ್ನಲ್‌ ಮೆಮೊರಿ ಹೊಂದಿದೆ. ಮೈಕ್ರೋ ಎಸ್‌ಡಿ ಮೂಲಕ ಸ್ಟೋರೇಜ್‌ ಸಾಮ ರ್ಥ್ಯವನ್ನು Yes Up to 128 GB ಹೆಚ್ಚಿಸಬಹುದು. ರಿಲಾಯನ್ಸ್‌ ಜಿಯೋ ಫೋನ್‌ 3Android v8.1 (Oreo) ಅಪರೇಟಿಂಗ್ ಸಿಸ್ಟಮ್‌ ಹೊಂದಿದ್ದು,  2800 mAh   ಬ್ಯಾಟರಿ ಸಾಮರ್ಥ್ಯ ಹಾಗೂ ಹೊಂದಿದೆ. Quad core, 1.4 GHz ಪ್ರೊಸೆಸರ್‌ ಹಾಗೂ MediaTek ( Taiwan )  ಚಿಪ್ ‌ ಹೊಂದಿದೆ.  2.0 ಮುಂಭಾಗದ ಕ್ಯಾಮರಾ ಹೊಂದಿದ್ದು, 5 MP ರಿಯರ್‌ ಕ್ಯಾಮರಾ ಹೊಂದಿದೆ. ನ ಅವಕಾಶ ನೀಡಲಾಗಿದೆ. ರಿಲಾಯನ್ಸ್‌ ಜಿಯೋ ಫೋನ್‌ 3 ನಲ್ಲಿ Accelerometer ಸೆನ್ಸರ್‌ ಸಹ ಲಭ್ಯವ ಿದೆ.  ಬ್ಲೂಟೂತ್‌ ಹಾಗೂ ಕನೆಕ್ಟಿವಿಟಿ ವಿಭಾಗದಲ್ಲಿ ರಿಲಾಯನ್ಸ್‌ ಜಿಯೋ ಫೋನ್‌ 34G (supports Indian bands),4G,3G,2G ಸಪೋರ್ಟ್ ‌ ಮಾಡುತ್ತದೆ. ಇದಲ್ಲದೆ ರಿಲಾಯನ್ಸ್‌ ಜಿಯೋ ಫೋನ್‌ 3 ಜಿಪಿಎಸ್‌, ವೈಫೈ, ಬ್ಲೂಟೂತ್‌, Volte ಇತ್ಯಾದಿಗಳನ್ನು ಹೊಂದಿದೆ.

ಸುಕನ್ಯಾ ಸಮೃದ್ಧಿಯಾಗಿ ಬದಲಾದ ಭಾಗ್ಯಲಕ್ಷ್ಮಿ ಯೋಜನೆ, ಮೆಚ್ಯೂರಿಟಿ ಹಣ 18 ವರ್ಷದಿಂದ 21 ವರ್ಷಕ್ಕೆ!

ಇಮೇಜ್
ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ 'ಸುಕನ್ಯಾ ಸಮೃದ್ಧಿ' ಯೋಜನೆ ಯಾಗಿ ಬದಲಾಗಿದೆ.  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 2006-07 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ....  ಬೆಂಗಳೂರು:  ಇದುವರೆಗೆ ' ಭಾಗ್ಯಲಕ್ಷ್ಮಿ' ಯೋಜನೆಯಲ್ಲಿ ಬಾಂಡ್‌ ಪಡೆದವರಿಗೆ 18 ವರ್ಷಕ್ಕೇ ಮೆಚ್ಯೂರಿಟಿ ಹಣ ಸಿಗುತ್ತಿತ್ತು. ಇನ್ನು ಮುಂದೆ 21 ವರ್ಷದವರೆಗೆ ಕಾಯಬೇಕು.  ಭಾಗ್ಯಲಕ್ಷ್ಮಿ ಯೋಜನೆ  ಇನ್ನು ಮುಂದೆ 'ಸುಕನ್ಯಾ ಸಮೃದ್ಧಿ' ಯೋಜನೆಯಾಗಿ ಬದಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 2006-07 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ಎಲ್‌ಐಸಿ ಅಡಿಯಲ್ಲಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿತ್ತು. ಇದೀಗ ಈ ಯೋಜನೆಯನ್ನು ಅಂಚೆ ಇಲಾಖೆಯ 'ಸುಕನ್ಯಾ ಸಮೃದ್ಧಿ ಯೋಜನೆ' ಗೆ ವರ್ಗಾಯಿಸಲಾಗಿದೆ. ಆಗಸ್ಟ್‌ನಿಂದ ಅಂಚೆ ಇಲಾಖೆಯು ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ. ''ಭಾಗ್ಯಲಕ್ಷ್ಮಿ ಯೋಜನೆಗಾಗಿ ಎಲ್‌ಐಸಿ ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಸರಕಾರ ಒಮ್ಮೆಗೆ ಪ್ರತಿ ಹೆಣ್ಣು ಮಗುವಿಗೆ 19,300 ರೂ. ಪಾವತಿಸುತ್ತಿತ್ತು. ಬಾಂಡ್‌ ಮೆಚ್ಯುರಿಟಿ ಆದ ಬಳಿಕ 1 ಲಕ್ಷ ರೂ. ಹಣ ನೀಡುವ ಷರತ್ತು ಇತ್ತು. ಆದರೆ ಕ್ರಮೇಣ ಎಲ್‌ಐಸಿ ತಕರಾರು ಮಾಡಲಾರಂಭಿಸಿತು. 2015-16ರವರೆಗೂ ತಕರಾರಿನೊಂದಿಗೆ ನಡೆಯಿತು. ಸರಕಾರ ಒಂದು ಮಗುವಿಗೆ ಒಮ್ಮೆಗೇ 30 ಸಾವಿರ ರೂ. ಪಾವತಿಸಬೇ...

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?

ಇಮೇಜ್
ವಾಟ್ಸಪ್ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಬಳಸುತ್ತಾರೆ ಎಂದಾದರೆ ಅವರು ಖಂಡಿತವಾಗಿಯೂ ವಾಟ್ಸಪ್ ಬಳಸುತ್ತಾರೆ. ಹೀಗಿರುವಾಗ ವಾಟ್ಸಪ್ ಕಾಲಕಾಲಕ್ಕೆ ಬಳಕೆದಾರರ ಅನುಕೂಲಕ್ಕಾಗಿ ವಿವಿಧ ಆಯ್ಕೆಗಳನ್ನು ಮತ್ತು ಅಪ್‌ಡೇಟ್‌ಗಳನ್ನು ಜನರಿಗೆ ನೀಡುತ್ತದೆ . ಅದಕ್ಕೂ ಮುಂಚೆ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಬೀಟಾ ಆವೃತ್ತಿ ಮೂಲಕ ಹೊಸ ಅಪ್‌ಡೇಟ್ ನೀಡಿ, ಅದನ್ನು ಪರಿಶೀಲನೆಗೆ ಒಳಪಡಿಸುತ್ತದೆ . ಈ ಬಾರಿ ಹಂತಹಂತವಾಗಿ ವಾಟ್ಸಪ್ ನೀಡಲು ಉದ್ದೇಶಿಸಿರುವ ಅಪ್‌ಡೇಟ್‌ಗಳ ವಿವರ ಇಲ್ಲಿದೆ .  ಕಾಂಟಾಕ್ಟ್ ಶಾರ್ಟ್‌ಕಟ್ : ಐಓಎಸ್ ವಾಟ್ಸಪ್ ಬೀಟಾ ಆವೃತ್ತಿ 2.20.70.18 ಮತ್ತು 2.20.70.19 ಇದರಲ್ಲಿ ಹೇಳಿರುವಂತೆ, ಇತರ ಆ್ಯಪ್‌ಗಳ ಮೂಲಕ ಲಿಂಕ್ ಕಳುಹಿಸಿದರೆ, ಅವರ ವಾಟ್ಸಪ್ ಕಾಂಟಾಕ್ಟ್ ಅನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಜತೆಗೆ ಶೇರ್ ಶೀಟ್‌ನಲ್ಲಿ ಫೋಟೋ ಮತ್ತಿತರ ವಿವರ ಕೂಡ ಅಪ್‌ಡೇಟ್ ಆಗುತ್ತಿರುತ್ತದೆ. ಮೆನು ಮರುವಿನ್ಯಾಸ : ಐಓಎಸ್ 13ರಲ್ಲಿ ಈಗ ಯಾವುದೇ ವಾಟ್ಸಪ್ ಮೆಸೇಜ್ ಅನ್ನು ಒತ್ತಿ ಹಿಡಿದಾಗ ಸ್ಟಾರ್, ರಿಪ್ಲೈ, ಕಾಪಿ, ಫಾರ್‌ವರ್ಡ್ ಮತ್ತು ಇನ್ಫೋ ಹಾಗೂ ಡಿಲೀಟ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದೇ ರೀತಿಯನ್ನು ಐಓಎಸ್ 12ರ ಆವೃತ್ತಿಯಲ್ಲೂ ವಾಟ್ಸಪ್ ಪರಿಚಯಿಸುತ್ತಿದೆ.  ಸರ್ಚ್ ಬೈ ಡೇಟ್ : ನಿಗದಿತ ದಿನಾಂಕವನ್ನು ನೀಡಿ, ಅದರ ಮೂಲಕ ಸರ್ಚ್ ...

Vivo Phone : ಒಂದೇ IMEI ಬಳಸಿ, 13,500ಕ್ಕೂ ಫೋನ್ ತಯಾರಿಸಿ ಗಂಭೀರ ಸ್ವರೂಪದ ಭದ್ರತಾ ಲೋಪ

ಇಮೇಜ್
ಒಂದೇ IMEI ಬಳಸಿ, 13,500ಕ್ಕೂ ಫೋನ್ ತಯಾರಿಸಿ ಗಂಭೀರ ಸ್ವರೂಪದ ಭದ್ರತಾ ಲೋಪ  ಎಸಗಿರುವ ಚೀನಾ ಮೂಲದ ವಿವೋ ಕಂಪನಿ ವಿರುದ್ಧ  ಮೀರತ್ ಸೈಬರ್ ಪೊಲೀಸರು ಸೂಕ್ತ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದಾರೆ . ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಫೋನ್‌ಗಳನ್ನು ಮಾರಾಟ ಮಾಡಿರುವ ಚೀನಾ ಮೂಲದ ವಿವೋ ಕಂಪನಿಯ ವಿರುದ್ಧ ಮೀರತ್ ಸೈಬರ್‌ಕ್ರೈಂ ಪೊಲೀಸರು ನಡೆಸಿದ ತನಿಖೆಯಲ್ಲಿ ಅಘಾತಕಾರಿ ಸಂಗತಿಯೊಂದು ಬಯಲಾಗಿದೆ. ಒಂದಲ್ಲ, ಎರಡಲ್ಲಾ, ಬರೋಬ್ಬರಿ 13,500ಕ್ಕೂ ಅಧಿಕ ಸ್ಮಾರ್ಟ್‌ಫೋನ್‌ಗಳನ್ನು ವಿವೋ ಒಂದೇ IMEI ಸಂಖ್ಯೆ ಬಳಸಿ ಉತ್ಪಾದಿಸಿದೆ ಎನ್ನಲಾಗಿದೆ .! IMEI ಸಂಖ್ಯೆ ಎನ್ನುವುದು ಇಂಟರ್‌ನ್ಯಾಶನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಟೆಂಟಿಟಿ ನಂಬರ್ ಆಗಿದೆ.   15 ಅಂಕಿಗಳ ವಿಶಿಷ್ಟ ಕೋಡ್ ನಂಬರ್ ಇದಾಗಿದ್ದು, ಒಂದು ಫೋನ್‌ಗೆ ಒಂದೇ IMEI ಎನ್ನುವ ನಿಯಮವಿದೆ. ಡ್ಯುಯಲ್ ಸಿಮ್ ಆಗಿದ್ದರೂ, ಎರಡು IMEI ಸಂಖ್ಯೆಯನ್ನು ಒಂದೇ ಫೋನ್ ಹೊಂದಿರುತ್ತದೆ.  ಆದರೆ ವಿವೋ ಮಾತ್ರ ಒಂದೇ IMEI ಸಂಖ್ಯೆ ಬಳಸಿಕೊಂಡು ಇ‍ಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೊಬೈಲ್ ಫೋನ್ ತಯಾರಿಸಿರುವುದು ಆತಂಕಕ್ಕೆ ಕಾರಣವಾಗಿದೆ.   ( ಹೀಗಾಗಿ ಮೀರತ್ ಪೊಲೀಸರು ಚೀನಾ ಮೂಲದ ವಿವೋ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ .) 5 ತಿಂಗಳಿನಿಂದ ತನಿಖೆ! ಮೀರತ್ ಸೈಬರ್‌ಕ್ರೈಂ ಪೊಲೀಸರು ಕಳೆದ 5 ತಿಂಗಳಿನಿಂದ ಸತತ ತನಿಖೆ ನಡೆಸಿ, ಈ ವಂಚನೆಯನ್ನು ಪತ್ತೆಹಚ್ಚಿ...

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

ಇಮೇಜ್
ಕೆಲವೊಂದು ಚಾನಲ್‌ಗಳಲ್ಲಿನ ಪ್ರಸಾರ ಚೆನ್ನಾಗಿಲ್ಲ ಎಂದು ಕೂಡ ಗ್ರಾಹಕರು ಹೇಳಿದ್ದರಿಂದ,   ಜೂನ್ 15ರ ಬಳಿಕ ಟಾಟಾ ಸ್ಕೈ ಕೆಲವೊಂದು ಚಾನಲ್‌ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.  ಈ ಮೂಲಕ ಪ್ಯಾಕ್‌ ದರದಲ್ಲಿ ಇಳಿಕೆ ಮಾಡಲು ಟಾಟಾ ಸ್ಕೈ ಚಿಂತನೆ ನಡಿಸಿದೆ . ಲಾಕ್‌ಡೌನ್ ಜಾರಿಯಾದ ಬಳಿಕ ದೇಶದಲ್ಲಿ ವಿಡಿಯೋ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳ ವೀಕ್ಷಣೆಯಲ್ಲಿ ಹೆಚ್ಚಳವಾಗಿದೆ.  ಆದರೆ ಟಿವಿ ವೀಕ್ಷಣೆಯ ಮೇಲೆ ಪರಿಣಾಮ ಬೀರಿದ್ದು, ಧಾರವಾಹಿಗಳ ಶೂಟಿಂಗ್ ನಡೆಯದ ಕಾರಣ ಪ್ರಸಾರ ನಿಂತುಹೋಗಿದೆ. ಹೀಗಾಗಿ ಟಿವಿ ಚಾನಲ್‌ಗಳಲ್ಲಿ ಧಾರವಾಹಿ ಮರುಪ್ರಸಾರವಾಗುತ್ತಿದೆ.   ಆದರೆ ಇದೇ ಸಂದರ್ಭದಲ್ಲಿ ಬಹುತೇಕರು ಡಿಟಿಎಚ್ ಸೇವೆಗಳಲ್ಲಿ ಚಾನಲ್ ಕಡಿತಕ್ಕೆ ನಿರ್ಧರಿಸಿದ್ದಾರೆ.  ಲಾಕ್‌ಡೌನ್ ಅವಧಿಯಲ್ಲಿ ಟಾಟಾ ಸ್ಕೈನ ಬಹುತೇಕ ಚಂದಾದಾರರು ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಚಾನಲ್ ಪ್ಯಾಕ್‌ನಲ್ಲಿ ಕಡಿತ ಮಾಡಿದ್ದಾರೆ.  ಕೆಲವೊಂದು ಚಾನಲ್‌ಗಳಲ್ಲಿನ ಪ್ರಸಾರ ಚೆನ್ನಾಗಿಲ್ಲ ಎಂದು ಕೂಡ ಗ್ರಾಹಕರು ಹೇಳಿದ್ದರಿಂದ, ಜೂನ್ 15 ರ ಬಳಿಕ  ಟಾಟಾ ಸ್ಕೈ ಕೆಲವೊಂದು ಚಾನಲ್‌ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.  ಈ ಮೂಲಕ ಪ್ಯಾಕ್‌ ದರದಲ್ಲಿ ಇಳಿಕೆ ಮಾಡಲು ಟಾಟಾ ಸ್ಕೈ ಚಿಂತನೆ ನಡಿಸಿದೆ. ಮೂಲಗಳ ಪ್ರಕಾರ ಅಂದಾಜು 70 ಲಕ್ಷಕ್ಕೂ ಅಧಿಕ ಚಂದಾದಾರರಿಗೆ ಚಾನಲ್‌ ವೆಚ್ಚ ಕಡಿತದ ಪ್ರಯೋಜನ ದೊರೆಯಲಿದೆ.  ತಿಂಗ...