ಪೋಸ್ಟ್‌ಗಳು

ಸೆಪ್ಟೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಜಮಾತೆ ಜೊತೆ ಸಿಎಂ ಮಾತುಕತೆ: ಜಂಬೂ ಸವಾರಿ ಪುಷ್ಪಾರ್ಚನೆಗೆ ಯದುವೀರ್‌ಗೆ ಆಹ್ವಾನ

ಇಮೇಜ್
ಮೈಸೂರು ದಸರಾಗೆ ಇಂದು ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ದಸರಾ ಹಿನ್ನೆಲೆಯಲ್ಲಿ,  ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ  ಸಿಎಂ ಯಡಿಯೂರಪ್ಪ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ದಸರಾ  ಮಹೋತ್ಸವಕ್ಕೆ ರಾಜ ಕುಟುಂಬದ ಕೊಡುಗೆಯನ್ನು ಸ್ಮರಿಸಿದರು. ಮೈಸೂರು: ಮೈಸೂರು ದಸರಾ 2019 ಮಹೋತ್ಸವ ಹಿನ್ನೆಲೆಯಲ್ಲಿ ರಾಜಮಾತೆ ಪ್ರಮೋದಾದೇವಿ‌ ಒಡೆಯರ್ ಅವರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅರಮನೆಯಲ್ಲಿ ಭೇಟಿ ಮಾಡಿ ಔಪಾಚಾರಿಕವಾಗಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ , ದಸರಾ ಮಹೋತ್ಸವದಲ್ಲಿ ರಾಜಮನೆತನದ ಕೊಡುಗೆ ಅಪಾರವಾಗಿದ್ದು , ರಾಜಮಾತೆ ಪ್ರಮೋದಾದೇವಿ ಅವರ ಜೊತೆ ಸಾಕಷ್ಟು ವಿಚಾರಗಳನ್ನು ಮಾತನಾಡಿದೆ ಎಂದರು. ಜಂಬೂಸವಾರಿ ದಿವಸ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ " ಯ ದುವೀರ್ ಒಡೆಯರ್" ಅವರನ್ನು‌ ಕಳುಹಿಸಬೇಕು ಎಂದು ರಾಜಮಾತೆಯವರಲ್ಲಿ‌ ಕೋರಿರುವುದಾಗಿ ಯಡಿಯೂರಪ್ಪ ತಿಳಿಸಿದರು. ಈ ಬಾರಿ ದಸರಾ ಮಹೋತ್ಸವ ತುಂಬಾ ಉತ್ತಮ ರೀತಿಯಲ್ಲಿ ಮೂಡಿಬಂದಿದ್ದು , ಫಲಪುಷ್ಪ ಪ್ರದರ್ಶನ ಹಾಗೂ ದೀಪಾಲಂಕಾರ ಪ್ರವಾಸಿಗರನ್ನು ಆಕರ್ಷಿಸುವಲ್ಲಿ‌ ಯಶಸ್ವಿಯಾಗುತ್ತವೆ. ಅದೇ ರೀತಿ ‌ಇಲ್ಲಿನ ಸಚಿವರು , ಶಾಸಕರು ಅಧಿಕಾರಿಗಳ ಜೊತೆ ಉತ್ತಮ‌ ಬಾಂಧವ್ಯದಿಂದ ಕೆಲಸ ಮಾಡಿರುವುದು ಕಂಡು ಬರುತ್ತದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಹದೇಶ್ವರ ಬೆಟ...

ಉಗ್ರಪೋಷಕರು ನಮ್ಮ ಬಗ್ಗೆ ಮಾತನಾಡಲು ಯೋಗ್ಯರಲ್ಲ: ವಿಶ್ವ ವೇದಿಕೆಯಲ್ಲಿ ಇಮ್ರಾನ್‌ ಜಾತಕ ಜಾಲಾಡಿದ ಮೈತ್ರಾ

ಇಮೇಜ್
ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿ, ಸುಳ್ಳು ಆರೋಪ  ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ದಿಟ್ಟ ಉತ್ತರ ನೀಡಿದೆ.  ನ್ಯೂಯಾರ್ಕ್: ಅಮೆರಿಕದ ಮೇಲೆ ದಾಳಿ ನಡೆಸಿದ ಒಸಾಮಾ ಬಿನ್‌ ಲಾಡೆನ್‌ಗೆ ಬಹಿರಂಗ ಬೆಂಬಲ ನೀಡಿದವರು ಯಾರು ? ವಿಶ್ವಸಂಸ್ಥೆ ನಿಷೇಧ ಹೇರಿರುವ 130 ಉಗ್ರರು ಮತ್ತು 25 ಉಗ್ರ ಸಂಘಟನೆಗಳನ್ನು ಸಾಕುತ್ತಿರುವ ದೇಶ ಯಾವುದು ? ಇದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿ, ಕಪೋಲಕಲ್ಪಿತ ಆರೋಪಗಳನ್ನು ಮಾಡಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ಕೊಟ್ಟ ದಿಟ್ಟ ಪ್ರತ್ಯುತ್ತರದ ಸ್ಯಾಂಪಲ್‌. ಇಮ್ರಾನ್‌ ಖಾನ್‌ ಆರೋಪಗಳಿಗೆ ತಿರುಗೇಟು ನೀಡಲು 'ಪ್ರತ್ಯುತ್ತರ ಹಕ್ಕು' ಬಳಸಿಕೊಂಡ ಭಾರತ, ಪಾಕ್‌ ಮಾಡಿದ ಒಂದೊಂದು ಆರೋಪಗಳನ್ನೂ ಹೆಕ್ಕಿ, ಅವುಗಳಿಗೆ ಖಡಕ್‌ ತಿರುಗೇಟು ನೀಡಿತು. ವಿಶ್ವಸಂಸ್ಥೆಯಲ್ಲಿಭಾರತದ ಕಾಯಂ ರಾಯಭಾರಿ-1 ಆಗಿರುವ ವಿದಿಶಾ ಮೈತ್ರಾ ಅವರ ಮಾತಿಗೆ ಪಾಕಿಸ್ತಾನ ಅಕ್ಷರಶಃ ತಬ್ಬಿಬ್ಬಾಯಿತು. ಇತ್ತೀಚೆಗೆ ಈ ಹುದ್ದೆಗೆ ನೇಮಕಗೊಂಡಿದ್ದರೂ ವಿದಿಶಾ ತಮ್ಮ ಪ್ರಖರ ನುಡಿಗಳ ಮೂಲಕ ಗಮನ ಸೆಳೆದರು. ಮಹಾಧಿವೇಶನದಲ್ಲಿಇಮ್ರಾನ್‌ ಖಾನ್‌ 15 ನಿಮಿಷಗಳ ಸಮಯಾವಕಾಶ ಮೀರಿ 50 ನಿಮಿಷಗಳ ಕಾಲ ಮಾತನಾಡಿದ್ದಲ್ಲದೆ, ಮಾತಿನುದ್ದಕ್ಕೂ ಯುದ್ಧ, ದ್ವೇಷ, ಹಗೆತನ, ಅಣ್ವಸ್ತ್ರ ಇತ್ಯಾದಿ ಪದಗಳನ್ನು ಬಳಸಿದ್ದರು. ವಿ...

ಸಿಯಾಚಿನ್ ಶೀಘ್ರದಲ್ಲೇ ಪ್ರವಾಸಿ ತಾಣ.....?

ಇಮೇಜ್
ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್​ಗೆ ಭೇಟಿ ನೀಡಲು ಸಾಮಾನ್ಯ ಜನರಿಗೂ ಅವಕಾಶ ನೀಡುವ ಬಗ್ಗೆ ಸೇನೆ ಚಿಂತನೆ ನಡೆಸಿದೆ. ಜಮ್ಮು-ಕಾಶ್ಮೀರದಿಂದ ಲಡಾಖನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ನಂತರ ಈ ಚರ್ಚೆ ಗರಿಗೆದರಿದೆ. ಲಡಾಖ್​ಗೆ ತೆರಳುತ್ತಿದ್ದ ಪ್ರವಾಸಿಗರು ಸಿಯಾಚಿನ್ ಪ್ರವೇಶಕ್ಕಾಗಿ ಆಗ್ರಹಿಸಿಕೊಂಡು ಬಂದಿದ್ದಾರೆ. ಆದರೆ, ಅದು ಆಯಕಟ್ಟಿನ ರಕ್ಷಣಾ ಪ್ರದೇಶವಾಗಿರುವುದರಿಂದ ಸೇನೆ ಜನರ ಪ್ರವೇಶವನ್ನು ನಿಷೇಧಿಸಿತ್ತು. ಅದೀಗ ತೆರವುಗೊಳ್ಳುವ ಸಾಧ್ಯತೆ ಇದೆ. ಸೇನೆಯ ವಿವಿಧ ತರಬೇತಿ ಕೇಂದ್ರಗಳ ಭೇಟಿಗೆ ನಾಗರಿಕರಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಸಿಯಾಚಿನ್ ಸಾಮರಿಕ ದೃಷ್ಟಿಯಿಂದ ಭಾರಿ ಮಹತ್ವ ಪಡೆದಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ. 21 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ ಜಗತ್ತಿನ ಅತ್ಯಂತ ಕ್ಲಿಷ್ಟ ಯುದ್ಧಭೂಮಿಯಾಗಿದೆ. ಕಳೆದ 35 ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಇಲ್ಲಿ ಎದುರುಬದರಾಗಿ ಜಮಾವಣೆಗೊಂಡಿವೆ. ಎರಡೂ ದೇಶಗಳು ಈ ಪ್ರದೇಶ ತಮಗೆ ಸೇರಿದ್ದು ಎಂದು ಹಕ್ಕು ಸಾಧಿಸುತ್ತಿವೆ. ಈ ವಿವಾದಿತ ಗ್ಲೇಸಿಯರ್ ಕುರಿತಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ 12 ಬಾರಿ ಮಾತುಕತೆ ನಡೆದಿದ್ದರೂ, ಯಾವುದೇ ನಿರ್ಣಾಯಕ ಫಲಿತಾಂಶ ಹೊರಹೊಮ್ಮಿಲ್ಲ. ಈ ದುರ್ಗಮ ಪ್ರದೇಶದಲ್ಲಿ ಸೈನಿಕರು ಜೀವವನ್ನೇ ಪಣಕ್ಕಿಟ್ಟು ಹೇಗೆ ಹೋರಾಡುತ್ತಾರೆ, ಹೇಗೆ ಕಾವಲು ಕಾಯುತ್ತಾರೆ ...

ವಿಶ್ವಸಂಸ್ಥೆಯ ಹೊರ ಆವರಣದಲ್ಲಿ ಮೊಳಗಿದ , ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬ ಘೋಷಣೆ @NAMO NAMO NAMO

ಇಮೇಜ್
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಕಟ್ಟಡದ ಹೊರಭಾಗದಲ್ಲಿ ಜಮಾಯಿಸಿದ್ದ ಭಾರತೀಯ ಮೂಲದವರು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಅಂದಾಜು 2,500ಕ್ಕೂ ಹೆಚ್ಚು ಜನರು ಅದರಲ್ಲೂ ವಿಶೇಷವಾಗಿ ಕಾಶ್ಮೀರಿ ಪಂಡಿತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದರು. ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬ ಘೋಷಣೆಯನ್ನು ಕೂಗಿದ್ದಲ್ಲದೆ, ವಂದೇ ಮಾತರಂ ಹಾಡನ್ನು ಹಾಡಿದರು. ಪ್ರಧಾನಿ ಮೋದಿ ಅವರ ತದ್ರೂಪಿಯಂತೆ ವೇಷ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬರ ಸುತ್ತ ನೆರೆದಿದ್ದ ಜನರು ಭಾರತದ ಪರ ಘೋಷಣೆ ಕೂಗಿದರು. ಶಂಖಾನಾದ ಮಾಡಿ ಸಂಭ್ರಮಿಸಿದರು. ಅಂದಾಜು 3 ದಶಕಕ್ಕೂ ಹೆಚ್ಚುಕಾಲದ ಬಳಿಕ ತಮ್ಮ ಮೂಲಸ್ಥಾನ ಕಾಶ್ಮೀರದಲ್ಲಿ ನೆಲೆಸಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸ ಪಟ್ಟರು. ಇದಕ್ಕೂ ಮುನ್ನ ಪಾಕಿಸ್ತಾನದ ಬಲೂಚಿಸ್ತಾನ, ಬಾಲ್ಟಿಸ್ತಾನ ಸೇರಿ ಪಾಕಿಸ್ತಾನದ ವಿವಿಧೆಡೆಗಳಲ್ಲಿ ಪಾಕಿಸ್ತಾನದ ಸೇನಾಪಡೆ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯ, ಆಗುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಕುರಿತು ವಿಶ್ವದ ಗಮನ ಸೆಳೆಯಲು ಸಹಕರಿಸುವಂತೆ ಆ ಭಾಗದ ಜನರು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡರು. ಜತೆಗೆ ವಿಮಾನದ ಬಾಲಕ್ಕೆ ವಿಶ್ವ ಸಮುದಾಯದ ಸಹಾಯಯಾಚಿಸುವ ಬಲೂಚಿಸ್ತ...

ನಮ್ಮ ವ್ಯವಸ್ಥೆ ಇಡೀ ಜಗತ್ತಿಗೆ ಸ್ಫೂರ್ತಿಯ ಸಂದೇಶವನ್ನು ಸಾರುತ್ತದೆ: ವಿಶ್ವಸಂಸ್ಥೆಯಲ್ಲಿ ಮೋದಿ

ಇಮೇಜ್
ನ್ಯೂಯಾರ್ಕ್​: ತಮ್ಮ ಸರ್ಕಾರ ಅಧಿಕಾರಕ್ಕೆ ಮೊದಲ ಅವಧಿಯಲ್ಲಿ ಆರಂಭಿಸಿದ ಸ್ವಚ್ಛತಾ ಅಭಿಯಾನಕ್ಕೆ ಸ್ಪಂದಿಸಿದ ಭಾರತದ 130 ಕೋಟಿ ಜನರು ಅದನ್ನು ಯಶಸ್ವಿಗೊಳಿಸಿದರು. ಅಭಿವೃದ್ಧಿಶೀಲ ರಾಷ್ಟ್ರದ ಇಂಥ ಕಾರ್ಯಕ್ರಮಗಳು ಇಡೀ ವಿಶ್ವಕ್ಕೆ ಮಾದರಿಯಾಗಿ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶುಕ್ರವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಜಾಗತಿಕ ನಾಯಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೊಂದು ವಿಶ್ವದಲ್ಲೇ ಬಹುದೊಡ್ಡ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಕೇವಲ 5 ವರ್ಷಗಳಲ್ಲಿ ನಮ್ಮ ಸರ್ಕಾರ 11 ಕೋಟಿ ಜನರಿಗೆ ಶೌಚಗೃಹ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ. ಈ ವ್ಯವಸ್ಥೆ ಇಡೀ ಜಗತ್ತಿಗೆ ಸ್ಪೂರ್ತಿಯ ಸಂದೇಶವನ್ನು ನೀಡುತ್ತದೆ ಎಂದು ತಿಳಿಸಿದರು. ಒಮ್ಮ ಬಳಸಬಹುದಾದ ಪ್ಲಾಸ್ಟಿಕ್​ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ಭಾರತ ಆರಂಭಿಸಿರುವ ಅಭಿಯಾನದ ಬಗ್ಗೆ ಮಾತನಾಡಿ, ನಾನು ಇಲ್ಲಿಗೆ ಆಗಮಿಸುವಾಗ ವಿಶ್ವಸಂಸ್ಥೆಯ ಗೋಡೆಯ ಮೇಲೆ ಬರೆದಿದ್ದ “ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್​ ನಿಷೇಧ” ಎಂಬ ಸಾಲನ್ನು ಓದಿದೆ. ಇದರ ವಿರುದ್ಧ ನಾವೂ ಕೂಡ ಬಹುದೊಡ್ಡ ಅಭಿಯಾನ ನಡೆಸುತ್ತಿದ್ದೇವೆ ಎಂಬುದನ್ನು ನಿಮಗೆ ಹೇಳಲು ತುಂಬಾ ಸಂತಸವಾಗುತ್ತದೆ ಎಂದರು. ತಾವು ಇಲ್ಲಿ ಭಾರತದ 130 ಕೋಟಿ ಜನರ ಪ್ರತಿನಿಧಿಯಾಗಿ ಮಾತನಾಡುತ್ತ...

ಸೇನಾ ಭದ್ರತೆ ಹೊಂದಿರುವ ಈ ಆನೆಯ ಹಿಂದಿದೆ ಒಂದು ರೋಚಕ ಕತೆ!

ಇಮೇಜ್
ಕೊಲಂಬೋ: ನಡುಂಗಮುವ ರಾಜ ಎಂಬ ಹೆಸರಿನ 65 ವರ್ಷದ ಸೆಲೆಬ್ರಿಟಿ ಆನೆ ಅಂದಾಜು 10.5 ಅಡಿ ಎತ್ತರವಿದೆ. ಶ್ರೀಲಂಕಾದಲ್ಲೇ ಅತಿ ಉದ್ದದ ದಂತವನ್ನು ಹೊಂದಿರುವ ಈ ಆನೆಗೆ ಇನ್ನೊಂದು ವಿಶೇಷತೆ ಇದೆ. ಅದನ್ನು ಹೇಳಿದರೆ ಒಮ್ಮೆ ನೀವು ಬೆರಗಾಗುವುದು ಖಂಡಿತ. ಈ ಆನೆಗೆ ಒಂದು ವಿಶೇಷ ಸೌಲಭ್ಯವಿದೆ. ಅದೇನೆಂದರೆ, ಈ ಆನೆ ಎಲ್ಲೇ ಹೋದರೂ ಶಸ್ತ್ರಸಜ್ಜಿತ ಕಾವಲುಗಾರರು ಇದರ ಹಿಂದೆ ಇದ್ದೇ ಇರುತ್ತಾರೆ. ಈ ಬಗ್ಗೆ ಮಾತನಾಡಿರುವ ಆನೆಯ ಮಾಲೀಕ ಲಂಕಾದಲ್ಲಿ ನಡೆಯುವ ಹಬ್ಬದ ದಿನಗಳಲ್ಲಿ ಮುಖ್ಯರಸ್ತೆಗಳಲ್ಲಿ ಆನೆ ಸಾಗುವಾಗ ಅದರ ರಕ್ಷಣೆಗಾಗಿಯೇ ಸರ್ಕಾರ ಭದ್ರತೆಯನ್ನು ನಿಯೋಜಿಸಿದೆ ಎಂದು ತಿಳಿಸಿದ್ದಾರೆ. 2015ರ ಸೆಪ್ಟೆಂಬರ್​ನಲ್ಲಿ ಆನೆ ದಾರಿಯಲ್ಲಿ ಸಾಗುವಾಗ ವಾಹನ ಚಾಲಕನೊಬ್ಬ ಆನೆಗೆ ಅಪ್ಪಳಿಸಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದು ಸರ್ಕಾರದ ಗಮನಕ್ಕೆ ಬಂದು, ನನ್ನನ್ನು ಸಂಪರ್ಕಿಸಿ ಆನೆ ರಸ್ತೆಯಲ್ಲಿ ಸಾಗುವಾಗ ರಕ್ಷಣೆ ಒದಗಿಸುವುದಾಗಿ ತಿಳಿಸಿತು ಎಂದು ಆನೆ ಮಾಲೀಕ ಹರ್ಷ ಧರ್ಮವಿಜಯ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಜನಜಂಗುಳಿಯ ರಸ್ತೆಯಲ್ಲಿ ಆನೆ ತಿರುಗಾಡುವಾಗ ದಾರಿ ಮಾಡಿಕೊಡಲು ಸೇನಾ ಘಟಕದಲ್ಲಿ ಹೆಚ್ಚವರಿಯಾಗಿ ಎರಡು ರಕ್ಷಣಾ ತಂಡಗಳು ಪ್ರತಿನಿತ್ಯ ಇದರ ನಿರ್ವಹಣೆ ಮಾಡುತ್ತಿದೆ. ರಾಜ ಹೆಸರಿನ ಆನೆಯು ಅನಧಿಕೃತ ರಾಷ್ಟ್ರದ ನಿಧಿಯಾಗಿದೆ. ಶ್ರೀಲಂಕಾದ ಪವಿತ್ರ ಬುದ್ಧನ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಆಚರ...

ಸಿಒಎಸ್‌ಸಿ ಮುಖ್ಯಸ್ಥರಾಗಿ ಇಂದು ರಾವತ್‌ ಅಧಿಕಾರ ಸ್ವೀಕಾರ

ಇಮೇಜ್
ಭಾರತೀಯ ಸಶಸ್ತ್ರ ದಳದ ಮೂರು ಪಡೆಗಳ (ಭೂ, ವಾಯು, ನೌಕೆ) ಮುಖ್ಯಸ್ಥರು  ಚೀಫ್ಸ್‌ ಆಫ್‌ ಸ್ಟಾಫ್‌ ಕಮಿಟಿ (ಸಿಒಎಸ್‌ಸಿ)ಯಲ್ಲಿರುತ್ತಾರೆ. ಇವರ ಪೈಕಿ ಸೇವಾ  ಹಿರಿತನ ಹೊಂದಿರುವವರು ಸಮಿತಿ ಅಧ್ಯಕ್ಷರಾಗುತ್ತಾರೆ.  ಹೊಸದಿಲ್ಲಿ: ಸೇನಾಪಡೆಗಳ 'ಚೀಫ್ಸ್ ಆಫ್‌ ಸ್ಟಾಪ್‌ ಕಮಿಟಿ' ಮುಖ್ಯಸ್ಥರಾಗಿ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಮೇ 29ರಂದು ಅಂದಿನ ನೌಕಾಪಡೆ ಮುಖ್ಯಸ್ಥ ಸುನಿಲ್‌ ಲಂಬಾ ಅವರಿಂದ ಹಾಲಿ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ಅವರು ಅಧಿಕಾರ ಸ್ವೀಕರಿಸಿದ್ದರು.  ಧನೋವಾ ಈ ಮಾಸಾಂತ್ಯಕ್ಕೆ ನಿವೃತ್ತಿ ಹೊಂದಲಿದ್ದಾರೆ. ಭಾರತೀಯ ಸಶಸ್ತ್ರ ದಳದ ಮೂರು ಪಡೆಗಳ (ಭೂ, ವಾಯು, ನೌಕೆ) ಮುಖ್ಯಸ್ಥರು ಚೀಫ್ಸ್‌ ಆಫ್‌ ಸ್ಟಾಫ್‌ ಕಮಿಟಿ ( ಸಿಒಎಸ್‌ಸಿ )ಯಲ್ಲಿರುತ್ತಾರೆ. ಇವರ ಪೈಕಿ ಸೇವಾ ಹಿರಿತನ ಹೊಂದಿರುವವರು ಸಮಿತಿ ಅಧ್ಯಕ್ಷರಾಗುತ್ತಾರೆ. ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಸವಾಲುಗಳನ್ನು ಮಟ್ಟಹಾಕಲು ಮೂರು ಪಡೆಗಳ ನಡುವೆ ಸಾಮರಸ್ಯ ಸಾಧಿಸಿಒಗ್ಗಟ್ಟಿನ ರಣತಂತ್ರ ರೂಪಿಸುವುದು ಸಮಿತಿ ಮುಖ್ಯಸ್ಥರ ಹೊಣೆ. ಜನರಲ್‌ ರಾವತ್‌ ಡಿ.31ಕ್ಕೆ ನಿವೃತ್ತರಾಗಲಿದ್ದಾರೆ.                   ………………………...